ಟೈಂ ಪಾಸ್ ಬರಹಗಳು

ಆಗಷ್ಟ್ 3, 2010

ಮೈತ್ರೀಂ ಭಜತ

Filed under: ತರ್ಜುಮೆಗಳು — saagari @ 7:12 ಅಪರಾಹ್ನ

ಈ ಹಾಡನ್ನು ಎಮ್.ಎಸ್.ಸುಬ್ಬುಲಕ್ಷ್ಮಿಯವರು ಯು.ಎನ್.ಕಾನ್ಫರೆನ್ಸಿನಲ್ಲಿ ಹಾಡಿದ್ದರು. ಇದನ್ನು ಬರೆದವರು ಶೃಂಗೇರಿಯ ಆಗಿನ ಮಠಾಧಿಪತಿಗಳು.ಅದರ ತರ್ಜುಮೆ ಮಾಡಿಟ್ಟಿದ್ದೆ ಯಾವಾಗಲೋ…ಇಂದು ಹಾಕುವ ಮನಸ್ಸಾಯ್ತು, ಅದಕ್ಕೆ ನಿಮ್ಮ ಮುಂದೆ.

मैत्रीं भजत, अखिल हृज्जैत्रीम्
आत्मवतॆव परानपि पश्यत
युद्धं त्यजत, स्पर्धां त्यजत
त्यजत परॆष्वक्रममाक्रमणम् ॥

जननी पृथिवी कामदुघास्तॆ
जनकॊ दॆवः सकल दयालुः
दाम्यत दत्त दयध्वं जनता
श्रॆयॊ भूयात् सकल जनानाम् ॥

ಎಲ್ಲರ ಮನ ಗೆಲ್ಲಬಲ್ಲ
ಮೈತ್ರಿಯನು ಭಜಿಸು ನೀ |
ಕಾಣಬೇಕು ಪರರ ಕೂಡ
ನಿನ್ನವರ ಹಾಗೆ ನೀ ||

ಯುದ್ಧ ಬಿಟ್ಟು ಸ್ಪರ್ಧೆ ತೊರೆದು
ಶಾಂತಿಯ ಬರಮಾಡೋಣ |
ನಿಲ್ಲಿಸೋಣ ಪರರ ಮೇಲೆ
ಅಕ್ರಮದ ಆಕ್ರಮಣ ||

ನಮ್ಮ ತಾಯಿ ಭೂಮಿ ತಾಯಿ
ಎಲ್ಲ ಕೊಡುವ ಧಾತ್ರಿಯು |
ಪರಮ ದಯಾಳು ನಮ್ಮ ತಂದೆ
ಸಕಲ ದೇವರೊಡೆಯನು ||

ದುರಾಸೆಯ ಅಶ್ವಕೆ
ಜೀನನು ಬಿಗಿಯುತ |
ಬಾಳುನೀ ದಯೆ ಕರುಣೆ
ಪ್ರೀತಿಯ ತೋರುತ ||

ನಿನ್ನಂತೆಯೇ ಪರರ ಕಾಂಬ
ದೃಷ್ಟಿಯದು ದಿವ್ಯವು |
ಆಗಲೇ ಸಾಧ್ಯ ಜಗದಿ
ಪ್ರತಿಯೊಬ್ಬರ ಶ್ರೇಯವು ||

Create a free website or blog at WordPress.com.