ಈ ಹಾಡನ್ನು ಎಮ್.ಎಸ್.ಸುಬ್ಬುಲಕ್ಷ್ಮಿಯವರು ಯು.ಎನ್.ಕಾನ್ಫರೆನ್ಸಿನಲ್ಲಿ ಹಾಡಿದ್ದರು. ಇದನ್ನು ಬರೆದವರು ಶೃಂಗೇರಿಯ ಆಗಿನ ಮಠಾಧಿಪತಿಗಳು.ಅದರ ತರ್ಜುಮೆ ಮಾಡಿಟ್ಟಿದ್ದೆ ಯಾವಾಗಲೋ…ಇಂದು ಹಾಕುವ ಮನಸ್ಸಾಯ್ತು, ಅದಕ್ಕೆ ನಿಮ್ಮ ಮುಂದೆ.
मैत्रीं भजत, अखिल हृज्जैत्रीम्
आत्मवतॆव परानपि पश्यत
युद्धं त्यजत, स्पर्धां त्यजत
त्यजत परॆष्वक्रममाक्रमणम् ॥
जननी पृथिवी कामदुघास्तॆ
जनकॊ दॆवः सकल दयालुः
दाम्यत दत्त दयध्वं जनता
श्रॆयॊ भूयात् सकल जनानाम् ॥
ಎಲ್ಲರ ಮನ ಗೆಲ್ಲಬಲ್ಲ
ಮೈತ್ರಿಯನು ಭಜಿಸು ನೀ |
ಕಾಣಬೇಕು ಪರರ ಕೂಡ
ನಿನ್ನವರ ಹಾಗೆ ನೀ ||
ಯುದ್ಧ ಬಿಟ್ಟು ಸ್ಪರ್ಧೆ ತೊರೆದು
ಶಾಂತಿಯ ಬರಮಾಡೋಣ |
ನಿಲ್ಲಿಸೋಣ ಪರರ ಮೇಲೆ
ಅಕ್ರಮದ ಆಕ್ರಮಣ ||
ನಮ್ಮ ತಾಯಿ ಭೂಮಿ ತಾಯಿ
ಎಲ್ಲ ಕೊಡುವ ಧಾತ್ರಿಯು |
ಪರಮ ದಯಾಳು ನಮ್ಮ ತಂದೆ
ಸಕಲ ದೇವರೊಡೆಯನು ||
ದುರಾಸೆಯ ಅಶ್ವಕೆ
ಜೀನನು ಬಿಗಿಯುತ |
ಬಾಳುನೀ ದಯೆ ಕರುಣೆ
ಪ್ರೀತಿಯ ತೋರುತ ||
ನಿನ್ನಂತೆಯೇ ಪರರ ಕಾಂಬ
ದೃಷ್ಟಿಯದು ದಿವ್ಯವು |
ಆಗಲೇ ಸಾಧ್ಯ ಜಗದಿ
ಪ್ರತಿಯೊಬ್ಬರ ಶ್ರೇಯವು ||